ಕೊಟ್ಟೂರು: ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ
ಕೊಟ್ಟೂರು: ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ (ಕಾರ್ಮಿಕ ದಿನ) ಪ್ರಯುಕ್ತ, ಇಂದು ಕೊಟ್ಟೂರಿನಲ್ಲಿ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಅರ್ಥಪೂರ್ಣ ಕಾರ್ಯಕ್ರಮವನ್ನು 'ಹಸಿರು ಹೊನಲು ಸೇವಾ ಸಂಸ್ಥೆ (ರಿ), ಕೊಟ್ಟೂರು', 'ಪತಂಜಲಿ ಯೋಗ ಸಮಿತಿ, ಕೊಟ್ಟೂರು' ಮತ್ತು 'ಶ್ರೀ ಸ್ವಾಮಿ ವಿವೇಕಾನಂದ ಚಾರಿಟಬಲ್ ರಕ್ತ ಕೇಂದ್ರ, ಬಳ್ಳಾರಿ' ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು ರಕ್ತ ದಾನ - ಶ್ರೇಷ್ಠ ದಾನ - ಜೀವದಾನ" ಎಂಬ ತತ್ವದಡಿ ನಡೆದ ಈ ಶಿಬಿರದಲ್ಲಿ ಹಲವು ದಾನಿಗಳು ಭಾಗವಹಿಸಿ ರಕ್ತದಾನ ಮಾಡಿದರು. ಪ್ರತಿಯೊಬ್ಬರೂ ಮಾಡುವ ರಕ್ತದಾನವು ಒಂದು ಪ್ರಾಣವನ್ನು ಉಳಿಸಲು ಸಹಕಾರಿಯಾಗುತ್ತದೆ ಎಂಬ ಸಂದೇಶವನ್ನು ಕಾರ್ಯಕ್ರಮದಲ್ಲಿ ಸಾರಲಾಯಿತು. ಕಾರ್ಯಕ್ರಮದ ವಿವರಗಳು: ದಿನಾಂಕ: 01-05-2026, ಶುಕ್ರವಾರ ಸಮಯ: ಬೆಳಿಗ್ಗೆ 9:00 ರಿಂದ ಸಂಜೆ 5:00 ರವರೆಗೆ ಸ್ಥಳ: ನಾಗರಾಜ ಶಾಲೆ, ಬಸ್ ನಿಲ್ದಾಣದ ಹತ್ತಿರ, ಕೊಟ್ಟೂರು ನೆತ್ತರಿನ ಒಂದು ಹನಿ ಕೊಟ್ಟವನೇ ಧನಿ. ಸಮಾಜದ ಹಿತಕ್ಕಾಗಿ ರಕ್ತದಾನ ಮಾಡುವ ಇಂತಹ ಕಾರ್ಯಕ್ರಮಗಳು ಇಂದಿನ ಅಗತ್ಯವಾಗಿದೆ. ವರದಿ:- ಟಿವಿ ನ್ಯೂಸ್ ಕನ್ನಡ ಏಷ್ಯನ್ ನೆಟ್ವರ್ಕ್