ಮಾನವೀಯತೆ ಮರೆತ ಕಾಲೇಜು ಮಂಡಳಿ: ಫೀಸ್ ಕಟ್ಟಿಲ್ಲವೆಂದು ವಿದ್ಯಾರ್ಥಿನಿಯ ಬೈಕ್ ಅಡಮಾನ ಇಟ್ಟುಕೊಂಡು ಹಾಲ್ ಟಿಕೆಟ್ ವಿತರಣೆ!
ಮಾನವೀಯತೆ ಮರೆತ ಕಾಲೇಜು ಮಂಡಳಿ: ಫೀಸ್ ಕಟ್ಟಿಲ್ಲವೆಂದು ವಿದ್ಯಾರ್ಥಿನಿಯ ಬೈಕ್ ಅಡಮಾನ ಇಟ್ಟುಕೊಂಡು ಹಾಲ್ ಟಿಕೆಟ್ ವಿತರಣೆ! ಹಾವೇರಿ: ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ನಿಲ್ಲಬೇಕಾದ ಕಾಲೇಜು ಆಡಳಿತ ಮಂಡಳಿಯೊಂದು, ಬಾಕಿ ಹಣಕ್ಕಾಗಿ ವಿದ್ಯಾರ್ಥಿನಿಯ ಪೋಷಕರ ಬೈಕ್ ಅನ್ನೇ ಅಡಮಾನ ಇಟ್ಟುಕೊಂಡಿರುವ ಅಮಾನವೀಯ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ನಡೆದಿದೆ. ಘಟನೆಯ ಹಿನ್ನೆಲೆ: ರಾಣೇಬೆನ್ನೂರಿನ ಬಿಎಜೆಎಸ್ಎಸ್ (BAJSS) ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಸಾರಾ ಜೆಸ್ಸಿಕಾ ಎಂಬ ವಿದ್ಯಾರ್ಥಿನಿ ಇಂದು (ಫೆ.28) ಕನ್ನಡ ಪರೀಕ್ಷೆ ಬರೆಯಲು ಕಾಲೇಜಿಗೆ ಬಂದಿದ್ದರು. ಸುಮಾರು 30 ಸಾವಿರ ರೂಪಾಯಿ ಕಾಲೇಜು ಶುಲ್ಕ ಬಾಕಿ ಇದೆ ಎಂಬ ಕಾರಣ ನೀಡಿ ಆಡಳಿತ ಮಂಡಳಿ ಹಾಲ್ ಟಿಕೆಟ್ ನೀಡದೆ ಸತಾಯಿಸಿದೆ. ಬಿಇಒ ಸೂಚನೆ: ಈ ಗಂಭೀರ ವಿಷಯದ ಬಗ್ಗೆ ಮಾಹಿತಿ ಪಡೆದಿರುವ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಶ್ಯಾಮಸುಂದರ್ ಅಡಿಗ ಅವರು, ವಿದ್ಯಾರ್ಥಿನಿಗೆ ತೊಂದರೆ ನೀಡಿದ ಕಾಲೇಜು ಮಂಡಳಿಗೆ ನೋಟಿಸ್ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. [HELP LINE - ಸಾರ್ವಜನಿಕರ ಗಮನಕ್ಕೆ] ನಿಮ್ಮ ಸುತ್ತಮುತ್ತಲಿನ ಯಾವುದೇ ಶಾಲೆ ಅಥವಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೇಲೆ ಇಂತಹ ದೌರ್ಜನ್ಯ, ಕಿರುಕುಳ ಅಥವಾ ಅನ್ಯಾಯ ನಡೆದರೆ ತಕ್ಷಣವೇ ಧ್ವನಿ ಎತ್ತಿ. ನಿಮ್ಮ ನೆರವಿಗೆ ನಾವು ಸದಾ ಸಿದ್ಧ. ಈ ಕೆಳಗಿನ ಸಂಖ್ಯೆಗಳಿಗೆ ಕೂಡಲೇ ...