ದಾವಣಗೆರೆ ದಕ್ಷಿಣ ಕ್ಷೇತ್ರ: BJP - JDS ಮೈತ್ರಿ ಟಿಕೆಟ್‌ಗೆ ಮಾಜಿ ಸಿಎಂ ಕುಟುಂಬ ಕಸರತ್ತು; ಮಹಿಮಾ ಪಟೇಲ್‌ಗೆ ಅವಕಾಶ?


 ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಕುರಿತು ಬಿಜೆಪಿ, ಕಾಂಗ್ರೆಸ್‌ನಲ್ಲಿ ಟಿಕೆಟ್‌ ಕಸರತ್ತು ಜೋರಿದೆ. ಈ ನಡುವೆ ಅಚ್ಚರಿ ಎಂಬಂತೆ ಜೆಡಿಯು ನಾಯಕ ಮಹಿಮಾ ಜೆ ಪಟೇಲ್ ಅವರು ಬಿಜೆಪಿ ಜೆಡಿಎಸ್‌ ಮೈತ್ರಿ ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಜೆಡಿಯು ನಾಯಕ ನಿತೀಶ್‌ ಕುಮಾರ್ ಅವರ ಜತೆ ಚರ್ಚೆ ನಡೆಸುತ್ತಿದ್ದಾರೆ. ಒಂದು ವೇಳೆ ಬಿಜೆಪಿ ಹೈಕಮಾಂಡ್‌ ಒಪ್ಪಿದರೆ ಟಿಕೆಟ್‌ ಜೆಡಿಯು ಪಾಲಾಗಲಿದೆ.

ದಾವಣಗೆರೆ: ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ತೆರವಾದ ದಾವಣಗೆರೆ ದಕ್ಷಿಣ ಲೋಕಸಭಾ ಕ್ಷೇತ್ರದ ಮೇಲೆ ಕರ್ನಾಟಕ ಮಾಜಿ ಸಿಎಂ ಕುಟುಂಬವೂ ಕಣ್ಣಿಟ್ಟಿದೆ. ಬಿಜೆಪಿ ಜೆಡಿಎಸ್‌ ಮೈತ್ರಿ ಟಿಕೆಟ್‌ಗೆ ಮಾಜಿ ಸಿಎಂ ಜೆಎಚ್‌ ಪಟೇಲ್‌ ಪುತ್ರ ಮಹಿಮಾ ಪಟೇಲ್ ಕಸರತ್ತು ನಡೆಸುತ್ತಿದ್ದಾರೆ ಎಂಬ ಚರ್ಚೆ ಜೋರಿದೆ.

ಇತ್ತೀಚೆಗೆ ಮಹಿಮಾ ಪಟೇಲ್ ಅವರು ಜೆಡಿಯು ನಾಯಕ, ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರ ಬಳಿ ಈ ಬಗ್ಗೆ ಪ್ರಸ್ತಾಪಿಸಿದ್ದು, ಮಾರ್ಚ್‌ 2 ವಾರ ಬಿಹಾರಕ್ಕೆ ಭೇಟಿಯಾಗಿದ್ದಾರೆ ಎನ್ನಲಾಗಿದೆ. ಭೇಟಿ ವೇಳೆ ಬಿಜೆಪಿ, ಜೆಡಿಎಸ್‌ ಮನವೊಲಿಸಿ ಜೆಡಿಯುಗೆ ಟಿಕೆಟ್‌ ಕೊಡಿಸುವಂತೆ ಒತ್ತಾಯಿಸಲಿದ್ದಾರೆ. ಇನ್ನು ನಿತೀಶ್‌ ಕುಮಾರ್ ಅವರು ಕೂಡ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ತೆರೆಮರೆಗೆ ಸರಿದಿದ್ದ ಮಹಿಮಾ ಪಟೇಲ್

2018 ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಗಿರಿಯಿಂದ ಸ್ಪರ್ಧಿಸಿ ಸೋತಿದ್ದ ಮಹಿಮಾ ಜೆ ಪಟೇಲ್ ಅವರು ಆ ಬಳಿಕ ತೆರೆಮರೆಗೆ ಸರಿದಿದ್ದರು. ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳಲ್ಲಿ, ರಾಜಕೀಯ ನಡೆಗಳಿಂದ ಗುರುತಿಸಿಕೊಂಡಿರಲಿಲ್ಲ. ಇನ್ನು 2023 ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲೇ ಇಲ್ಲ. ಈ ಏಕಾಏಕಿ ದಾವಣಗೆರೆ ದಕ್ಷಿಣ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದು ಕುತೂಹಲ ಮೂಡಿಸಿದೆ.

ಜಿಲ್ಲಾ ಬಿಜೆಪಿ ಒಪ್ಪಲಿದೆಯೇ?

2008 ರಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರ ರಚನೆಯಾಯಿತು. ಅಂದಿನಿಂದ ಶಾಮನೂರು ಶಿವಶಂಕರಪ್ಪ ಅವರೇ ಸತತವಾಗಿ 4 ಬಾರಿ ಶಾಸಕರಾಗಿ ಆಯ್ಕೆಯಾದರು. ಅವರ ನಿಧನದ ಬಳಿಕ ಉಪ ಚುನಾವಣೆ ಮುಂದಿನ 2 - 3 ತಿಂಗಳಲ್ಲಿ ನಡೆಯಲಿದ್ದು, ಬಿಜೆಪಿ ಕ್ಷೇತ್ರವನ್ನು ತಮ್ಮ ವಶಕ್ಕೆ ಪಡೆದುಕೊಳ್ಳಬೇಕು ಎಂದು ದೊಡ್ಡ ತಯಾರಿ ಮಾಡಿಕೊಳ್ಳುತ್ತಿದೆ. ಪ್ರಮುಖವಾಗಿ ಯಶವಂತ್‌ ರಾವ್ ಜಾಧವ್‌, ಬಿಜಿ ಅಜಯ್‌ ಕುಮಾರ್, ಬಿ ಲೋಕೇಶ್‌ ಪ್ರಬಲ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ (2023) ಸೋತಿದ್ದ ಬಿಜಿ ಅಜಯ್‌ ಕುಮಾರ್ ಮತ್ತೊಮ್ಮೆ ಅವಕಾಶ ಕೋರಿದ್ದಾರೆ. ಈ ನಡುವೆ ಮೈತ್ರಿ ಟಿಕೆಟ್‌ ಅನ್ನು ಜೆಡಿಯುಗೆ ಬಿಟ್ಟುಕೊಡಲು ಒಪ್ಪುವ ಸಾಧ್ಯತೆ ಕಡಿಮೆ. ಆದರೆ, ಕೊನೆಗೆ ಹೈಕಮಾಂಡ್‌ ತೀರ್ಮಾನವಾದರೆ ಅನಿವಾರ್ಯವಾಗಿ ಬೆಂಬಲ ಕೊಡಬೇಕಿದೆ

ಸಾಧ್ಯತೆಗಳು ಏನು?

ಮಹಿಮಾ ಜೆ ಪಟೇಲ್ ಬಣಜಿಗ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ದಾವಣಗೆರೆ ದಕ್ಷಿಣದಲ್ಲಿ 35 ಸಾವಿರ ಮತಗಳು ಇವೆ. ಇದರಿಂದ ಮೈತ್ರಿ ಟಿಕೆಟ್‌ ಸಿಕ್ಕರೆ ಗೆಲುವು ಸುಲಭವಾಗಬಹುದು.

ಇನ್ನೂ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿಯು ಬಣ ರಾಜಕೀಯವಿದ್ದು, ಒಂದು ಬಣಕ್ಕೆ ಟಿಕೆಟ್‌ ಸಿಕ್ಕರೆ ಇನ್ನೊಂದು ಬಣ ಬೆಂಬಲ ನೀಡದಿರುವ ಸಾಧ್ಯತೆ ಇದೆ. ಹೀಗಾಗಿ, ಬಿಜೆಪಿ ಹೈಕಮಾಂಡ್‌ ಜೆಡಿಯುನತ್ತ ಆಸಕ್ತಿ ತೋರಬಹುದು.

ಇನ್ನು ಎನ್‌ಡಿಎ ಪ್ರಬಲ ನಾಯಕ ನಿತೀಶ್‌ ಕುಮಾರ್ ಮಾತಿಗೆ ಗೌರವ ಕೊಟ್ಟಿ ಟಿಕೆಟ್‌ ನೀಡುವ ಸಾಧ್ಯತೆ ಇದೆ.

ಮಹಿಮಾ ಪಟೇಲ್ ರಾಜಕೀಯ ಹಿನ್ನೆಲೆ ಏನು?

ಮೊದಲ ಬಾರಿ 2004ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಜೆಡಿಎಸ್ ತೊರೆದ ನಂತರ, ಭ್ರಷ್ಟಾಚಾರ ರಹಿತ ರಾಜಕಾರಣದ ಧ್ಯೇಯದೊಂದಿಗೆ "ಸುವರ್ಣ ಯುಗ" ಎಂಬ ತಮ್ಮದೇ ಆದ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು.

ನಂತರದ ದಿನಗಳಲ್ಲಿ ಅವರು ಕಾಂಗ್ರೆಸ್ ಪಕ್ಷದೊಡನೆ ಗುರುತಿಸಿಕೊಂಡರು.

ಆ ಬಳಿಕ ಮತ್ತೆ ಜೆಡಿಎಸ್‌ಗೆ ಮರಳಿದರು. 2014ರ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದರು.

ಪ್ರಸ್ತುತ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಸಂಯುಕ್ತ) (ಜೆಡಿಯು) ಪಕ್ಷದ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ತುಮಕೂರಿನ ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಷಯದಲ್ಲಿ ಬಿ.ಇ. ಪದವಿ ಪಡೆದಿದ್ದಾರೆ.

ಕಾಂಗ್ರೆಸ್‌ನಲ್ಲಿ ಟಿಕೆಟ್‌ ಗಲಾಟೆ

ಕಾಂಗ್ರೆಸ್‌ ಟಿಕೆಟ್‌ಗೆ ಶಾಮನೂರು ಕುಟುಂಬ, ಕ್ಷೇತ್ರದ ಅಲ್ಪಸಂಖ್ಯಾತ ಮುಖಂಡರ ನಡುವೆ ದೊಡ್ಡ ಫೈಟ್‌ ನಡೆಯುತ್ತಿದೆ. ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ ಅವರು ತಮ್ಮ ಪುತ್ರನಿಗೆ ಟಿಕೆಟ್‌ ಕೊಡಿಸಬೇಕು ಎಂದು ಸರ್ಕಾರದ, ಹೈಕಮಾಂಡ್‌ ಮಟ್ಟದಲ್ಲಿ ದೊಡ್ಡ ಲಾಬಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇನ್ನು ಅಲ್ಪಸಂಖ್ಯಾತ ಮುಖಂಡರು ಈ ಬಾರಿ ಟಿಕೆಟ್‌ ಬಿಟ್ಟುಕೊಡುವ ಮಾತೆ ಇಲ್ಲ ಎಂದು ಪಟ್ಟು ಹಿಡಿದುನಿಂತಿದ್ದಾ

Comments

Popular posts from this blog

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ದಾವಣಗೆರೆ: ಪೊಲೀಸರ ಮೇಲೆ ಕಾಂಗ್ರೆಸ್ ಮುಖಂಡನ ಪುತ್ರರಿಂದ ಹಲ್ಲೆ; ಮೊಬೈಲ್ ಕಸಿದು ದಾಂಧಲೆ!

ಲೋಕಾಯುಕ್ತ ದಾಳಿ: ಬಿಡಿಎ ಅರಣ್ಯಾಧಿಕಾರಿ ಮನೆಯಲ್ಲಿ ₹3.08 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ!