20 ಸಚಿವರ ಡಿಕೆಶಿ ಸಂಪುಟ: ಯಾವ ಸಮುದಾಯಕ್ಕೆ ಎಷ್ಟು ಪ್ರಾತಿನಿಧ್ಯ?


 ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೊಸದಾಗಿ 19 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದ ಗ್ಲಾಸ್ ಹೌಸ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಈ ಮೂಲಕ ಮುಖ್ಯಮಂತ್ರಿ ಸೇರಿ ಸಂಪುಟದ ಒಟ್ಟು ಸದಸ್ಯರ ಸಂಖ್ಯೆ ಗರಿಷ್ಠ ಮಿತಿ 33ಕ್ಕೆ ತಲುಪಿದೆ. ಪ್ರಾದೇಶಿಕ ಸಮತೋಲನ ಹಾಗೂ ಜಾತಿವಾರು ಸಮೀಕರಣವನ್ನು ಗಮನದಲ್ಲಿಟ್ಟುಕೊಂಡು ಹೊಸ ಸಂಪುಟವನ್ನು ರಚಿಸಲಾಗಿದೆ. ನೂತನ ಸಂಪುಟದ ಜಾತಿ ಪ್ರಾತಿನಿಧ್ಯದ ವಿವರ ಇಲ್ಲಿದೆ.

ಸಂಪುಟದಲ್ಲಿ ಲಿಂಗಾಯತ ಹಾಗೂ ಪರಿಶಿಷ್ಟ ಜಾತಿ ಸಮುದಾಯಕ್ಕೆ ತಲಾ 7 ಸ್ಥಾನ ಸಿಕ್ಕಿದ್ದರೆ, ಒಕ್ಕಲಿಗ ಮತ್ತು ಹಿಂದುಳಿದ ವರ್ಗಕ್ಕೆ ತಲಾ 5 ಹಾಗೂ 7 ಸ್ಥಾನ ನೀಡಲಾಗಿದೆ. ಉಳಿದಂತೆ ಅಲ್ಪಸಂಖ್ಯಾತರಿಗೆ 4, ಪರಿಶಿಷ್ಟ ಪಂಗಡಕ್ಕೆ 3 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.

ಜಾತಿವಾರು ಸಚಿವರ ವಿವರ

ಲಿಂಗಾಯತ ಸಮುದಾಯ


ಎಂ. ಬಿ. ಪಾಟೀಲ್


ಈಶ್ವರ್ ಖಂಡ್ರೆ


ಬಸವರಾಜ್ ರಾಯರೆಡ್ಡಿ


ವಿಜಯಾನಂದ ಕಾಶಪ್ಪನವರ


ಲಕ್ಷ್ಮಣ ಸವದಿ


ಡಾ. ಶರಣ ಪ್ರಕಾಶ್ ಪಾಟೀಲ್


ಎಸ್. ಎಸ್. ಮಲ್ಲಿಕಾರ್ಜುನ


ಒಕ್ಕಲಿಗ ಸಮುದಾಯ

ಡಿ.ಕೆ. ಶಿವಕುಮಾರ್ (ಮುಖ್ಯಮಂತ್ರಿ)


ಕೃಷ್ಣ ಬೈರೇಗೌಡ


ಎನ್. ಚೆಲುವರಾಯಸ್ವಾಮಿ

ಎಚ್. ಸಿ. ಬಾಲಕೃಷ್ಣ


ಕೆ. ಎಂ. ಶಿವಲಿಂಗೇಗೌಡ


ಪರಿಶಿಷ್ಟ ಜಾತಿ (SC)

ಡಾ. ಜಿ. ಪರಮೇಶ್ವರ (ಬಲಗೈ)


ಪಿ. ಎಂ. ನರೇಂದ್ರಸ್ವಾಮಿ (ಬಲಗೈ)


ಪ್ರಿಯಾಂಕ್ ಖರ್ಗೆ (ಬಲಗೈ)


ಕೆ. ಎಚ್. ಮುನಿಯಪ್ಪ (ಎಡಗೈ)


ಕೆ. ಎಸ್. ಬಸವಂತಪ್ಪ (ಎಡಗೈ)


ರುದ್ರಪ್ಪ ಲಮಾಣಿ (ಲಂಬಾಣಿ)


ಶಿವರಾಜ್ ಎಸ್. ತಂಗಡಗಿ (ಬೋವಿ)


ಪರಿಶಿಷ್ಟ ಪಂಗಡ (ST)

ಸತೀಶ್ ಜಾರಕಿಹೊಳಿ (ವಾಲ್ಮೀಕಿ)


ಟಿ. ರಘುಮೂರ್ತಿ (ವಾಲ್ಮೀಕಿ)

ಬಿ. ನಾಗೇಂದ್ರ (ವಾಲ್ಮೀಕಿ)


ಅಲ್ಪಸಂಖ್ಯಾತ ಸಮುದಾಯ


ಯು. ಟಿ. ಖಾದರ್ (ಮುಸ್ಲಿಂ)


ಬಿ.ಝಡ್. ಜಮೀರ್ ಅಹಮದ್ ಖಾನ್ (ಮುಸ್ಲಿಂ)


ರಿಜ್ವಾನ್ ಅರ್ಷದ್ (ಮುಸ್ಲಿಂ)


ಕೆ. ಜೆ. ಜಾರ್ಜ್ (ಕ್ರಿಶ್ಚಿಯನ್)


ಇತರ ಹಿಂದುಳಿದ ವರ್ಗಗಳು (OBC)

ಡಾ. ಯತೀಂದ್ರ ಸಿದ್ದರಾಮಯ್ಯ (ಕುರುಬ)


ಬಿ. ಭೈರತಿ ಸುರೇಶ್ (ಕುರುಬ)


ಪುಟ್ಟರಂಗ ಶೆಟ್ಟಿ (ಉಪ್ಪಾರ)


ಎಸ್. ಮಧು ಬಂಗಾರಪ್ಪ (ಈಡಿಗ)


ಸಂತೋಷ ಲಾಡ್ (ಮರಾಠ)


ಡಾ. ಅಜಯ್ ಸಿಂಗ್ (ರಜಪೂತ್)


ರಾಮಲಿಂಗಾರೆಡ್ಡಿ (ರೆಡ್ಡಿ)


ಬ್ರಾಹ್ಮಣ ಸಮುದಾಯಕ್ಕೆ ತಪ್ಪಿದ ಅವಕಾಶ

ಹೊಸ ಸಂಪುಟ ವಿಸ್ತರಣೆಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಸ್ಥಾನ ಸಿಕ್ಕಿಲ್ಲ. ಈ ಹಿಂದಿನ ಸಂಪುಟದಲ್ಲಿದ್ದ ದಿನೇಶ್ ಗುಂಡೂರಾವ್ ಅವರನ್ನು ಈ ಬಾರಿಯ ವಿಸ್ತರಣೆ ವೇಳೆ ಕೈಬಿಡಲಾಗಿದೆ. ದಿನೇಶ್ ಗುಂಡೂರಾವ್ ಅಥವಾ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಅವರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತಾದರೂ, ಅಂತಿಮವಾಗಿ ಯಾರಿಗೂ ಸ್ಥಾನ ಸಿಗದಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!